News Karnataka
ಸಿಟಿಜನ್ ಕಾರ್ನರ್

ಸಂತ ರವಿದಾಸರು ಭಕ್ತಿ ಚಳುವಳಿಯ ಹರಿಕಾರರು

Saint Ravidas was the originator of the Bhakti movement.
Photo Credit : by Author

ಔರಾದ: ರವಿದಾಸರ ಬೋಧನೆ, ವಿಚಾರಗಳು ಹಲವಾರು ಶ್ರೇಷ್ಠ ವ್ಯಕ್ತಿಗಳಿಗೆ ಪ್ರಭಾವಿತರಾಗಿದ್ದರು. ಇದೇ ಭಕ್ತಿ ಚಳುವಳಿಗೆ ಸಂಕೇತ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.

ತಾಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸಂತ ರವಿದಾಸ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರವಿದಾಸರು ಜಾತಿ ವ್ಯವಸ್ಥೆ, ಲಿಂಗ ತಾರತಮ್ಯವನ್ನು ವಿರೋಧಿಸಿದರು. ಶುದ್ಧ ಕಾಯಕ ಮನಸ್ಸಿನಲ್ಲಿ ನಂಬಿಕೆ ಇಟ್ಟವರು. ರವಿದಾಸರ ಭಕ್ತಿ ಪದ್ಯಗಳು ಕೆಲವು ಧರ್ಮದ ಪವಿತ್ರ ಗ್ರಂಥಗಳಲ್ಲಿ ಸೇರಿಸಿ ಅವರಿಗೆ ಗೌರವ ನೀಡಲಾಗುತ್ತದೆ. ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಪ್ರಭಾವ ಬೀರಿದವರು ಎಂದು ಹೇಳಿದರು.

ಉಪನ್ಯಾಸಕರಾದ ಶಿವಪುತ್ರ ಧರಣಿ ಮಾತನಾಡಿ, ಯುವಕರು ತಮ್ಮ ಮನಸ್ಸನ್ನು ನಿಯಂತ್ರದಲ್ಲಿಟ್ಟು ಕೊಳ್ಳಬೇಕು. ಧನಾತ್ಮಕ ವಿಚಾರ ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ವೀರಾತಾಯಿ ಕಾಂಬಳೆ, ವಿಜಯಲಕ್ಷ್ಮಿ ಪಾಟೀಲ್ ಇತರರು ಇದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *