News Karnataka
ಸಿಟಿಜನ್ ಕಾರ್ನರ್

ಗುರುಬಸವ ಪಟ್ಟದೇವರಿಗೆ ಸಂಯಮ ಪ್ರಶಸ್ತಿ, ಪಟ್ಟಣದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

Sanyama Award for Gurubasava Pattadeva: Sweets distributed in the town
Photo Credit : by Author

ಔರಾದ: ಯುವಕರು ಹಾಗೂ ಸಮಸ್ತ ಜನ ದುಶ್ಚಟಗಳಿಗೆ ಬಲಿಯಾಗದಿರಲಿ ಎಂದು ಪೂಜ್ಯಶ್ರೀ ಗುರುಬಸವ ಪಟ್ಟದೇವರು ದುಶ್ಚಟಗಳು ನನ್ನ ಜೋಲಿಗೆಯಲ್ಲಿ ಹಾಕಿ ತಮ್ಮ ಜೀವನ ಸುಖವಾಗಿ ಸಾಗಲಿ ಎಂದು ಹಿತವನ್ನು ಬಯಸಿದವರು ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.

ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ವತಿಯಿಂದ ಕೊಡಲ್ಪಡುವ ‘ಕರ್ನಾಟಕ ರಾಜ್ಯ ಸಂಯಮ ಪ್ರಶಸ್ತಿ 2021’ರ ಪೂಜ್ಯಶ್ರೀ ಗುರುಬಸವ ಪಟ್ಟದೇವರ ಪಡೆದ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಿ ಅವರು ಮಾತನಾಡಿದರು.

ಮದ್ಯಪಾನ ಹಾಗೂ ಧೂಮಪಾನ ಸೇವನೆಯಿಂದ ಪುರುಷರು ಹಾಗೂ ಸ್ತ್ರೀಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಂಶವನ್ನು ಮನಗಂಡು ಪೂಜ್ಯಶ್ರೀಗಳು ಜೋಳಿಗೆ ಹಿಡಿದು ದುಶ್ಚಟಗಳ ಭಿಕ್ಷೆ ಬೇಡಿದ ಪ್ರಯುಕ್ತ ಸಂಯಮ ಪ್ರಶಸ್ತಿ ದೊರೆತಿದ್ದು ಇಡಿ ಬಸವ ಭಕ್ತರಿಗೆ ಹರ್ಷವನ್ನು ತಂದಿದೆ ಎಂದು ಹೇಳಿದರು.

ಅನುಭವ ಮಂಟಪ ಗುರುಕುಲ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಗಜಾನಂದ ಮುಂಗೆ ಮಾತನಾಡಿ, ದುಶ್ಚಟಗಳಿಗೆ ಬಲಿಯಾದ ವ್ಯಕ್ತಿಯ ಜೀವನ ಅತ್ಯಲ್ಪವಾಗುತ್ತದೆ. ಇದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂತಪುರ ಅನುಭವ ಮಂಟಪ ಅಧ್ಯಕ್ಷರಾದ ಬಸವರಾಜ ಬಿರಾದರ, ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *