News Karnataka
ರಾಜಕೀಯ

ಔರಾದ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮಾಡಲು ಒಂದು ಅವಕಾಶ ನೀಡಿ

Give the Aurad constituency a chance to model in the state itself
Photo Credit : Ravi Mathapati

ಔರಾದ: ಏಕತಾ ಫೌಂಡೇಶನ್‌ನ ಅಧ್ಯಕ್ಷ ರವೀಂದ್ರ ಸ್ವಾಮಿಯವರು ಏಕತಾ ಜನಾಶೀರ್ವಾದ ಯಾತ್ರೆ-2023ರ ಅಂಗವಾಗಿ ‘ಮುಂಗನಾಳ’ ರಕ್ಷಾಳ ಕೆ. ಗ್ರಾಮಕ್ಕೆ ಭೇಟಿ ಕೊಟ್ಟರು.

ಈ ವೇಳೆ ಮತ ಬಾಂಧವರ ಮನೆ-ಮನೆಗೆ ತೆರಳಿ ಅವರಲ್ಲಿ ಆಶೀರ್ವಾದ ಕೋರಿದರು. ಅಲ್ಲದೇ ಜನರನ್ನುದ್ದೇಶಿಸಿ ಮಾತನಾಡಿ, ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿನ ಭ್ರಷ್ಟ ಆಡಳಿತದ ಕುರಿತು ಪ್ರಶ್ನಿಸುವವರು ಯಾರು ಇರಲಿಲ್ಲ. ಆದರೆ ಈಗ ನಾನು ಬಂದಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿದ್ದರೆ ನಾನು ಎಲ್ಲವನ್ನು ಎದುರಿಸಲು ಹಾಗೂ ಒಳ್ಳೆಯ ಆಡಳಿತ ನೀಡಲು ತಯಾರಾಗಿದ್ದೇನೆ ಎಂದರು.

ಅಲ್ಲದೇ ತಾಲ್ಲೂಕಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ನನ್ನ ಸೇವೆಯನ್ನು ಕಂಡು ಇಂದಿನ ಶಾಸಕರು ಹತಾಶರಾಗಿದ್ದಾರೆ. ನನ್ನ ತಾಲ್ಲೂಕನ್ನು ಭಯಮುಕ್ತ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ. ನಿಮ್ಮೆಲ್ಲರ ಆಶಿರ್ವಾದ ಬೇಕೆಂದು ತಿಳಿಸಿದರು. ಗ್ರಾಮಗಳ ದರ್ಗಾ, ಮಂದಿರಗಳಿಗೆ ತೆರಳಿ ದರ್ಶನ ಪಡೆದರು. ವಿವಿಧ ಮಹಾತ್ಮರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.

Ravi Mathapati

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *