News Karnataka
ಧಾರ್ಮಿಕ

ಸಡಗರದಿಂದ ಜರುಗಿದ ರಣಗಂಬ ಜಾತ್ರಾ ಮಹೋತ್ಸವ

Ranagamba Jatra Mahotsava held with great fervour
Photo Credit : Ravi Mathapati

ಔರಾದ: ಬೀದರ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಣಗಂಬ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಇಲ್ಲಿನ ದೇಶಮುಖ್ ಮನೆತನದವರು ತಲೆ ತಲಾಂತರದಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ. ಸುಮಾರು 90 ಅಡಿ ಉದ್ದ ಇರುವ ಈ ರಣಗಂಬ 10ರಿಂದ 12 ಟನ್‌ನಷ್ಟು ತೂಗುತ್ತದೆ. ಯಾವುದೇ ಯಂತ್ರದ ಸಹಾಯವಿಲ್ಲದೆ ಊರಿನ ಜನರೇ ಈ ರಣಗಂಬವನ್ನ ಮೇಲಕ್ಕೆ ನಿಲ್ಲಿಸುವುದು ಈ ಜಾತ್ರೆಯ ವಿಶೇಷವಾಗಿದೆ. ಬೃಹತ್ ಗಾತ್ರದ ಹಗ್ಗ ಹಾಗೂ ಕಟ್ಟಿಗೆಯ ಸಹಾಯದಿಂದ ಮೇಲೆತ್ತಿ ರಣಗಂಬವನ್ನು ಪ್ರತಿಷ್ಠಾಪಿಸುವುದು ಈ ಊರಿನವರ ಅಭಿಮಾನದ ಸಂಕೇತ.

ಇನ್ನೂ ಈ ರಣಗಂಬಕ್ಕೆ ಜಾತ್ರಾ ನಿಮಿತ್ಯವಾಗಿ ವಿಶೇಷ ಪೂಜೆಗಳು ಸಂದವು. ರಣಗಂಬವನ್ನ ಹೆಣ್ಣು ದೇವತೆಯ ಪ್ರತಿರೂಪವೆಂಬತೆ ಬಿಂಬಿಸಿ ಊರಿನ ಜನರು ಸೀರೆ, ಬಳೆ, ಬಟ್ಟೆ, ಗೋಧಿ ಉಡಿ ಅಕ್ಕಿ ತುಂಬಿ ತಮ್ಮ ಹರಿಕೆಯನ್ನ ತೀರಿಸಿದರು. ಬೆಳಗ್ಗೆ ನಸುಕಿನ ಜಾವ ರಣಗಂಬ ಏರಿಸುವುದು ಮಧ್ಯಾಹ್ನದವರೆಗೆ ಈ ಕೆಲಸ ನಡೆಯುತ್ತದೆ. ಸಂಜೆ ಊರಿನವರ ಸಮ್ಮುಖದಲ್ಲಿ ಕೋಲಾಟ, ನೃತ್ಯ, ಭಜನೆ, ನಂತರ ಆಂಧ್ಯಾ ಮೆರವಣಿಗೆ ನಡೆಯುತ್ತದೆ ನಂತರ ರಣಗಂಬವನ್ನ ನೆಲಕ್ಕೆ ಬಿಳಿಸಲಾಗುತ್ತದೆ.

ರಣಗಂಬ ಜಾತ್ರೆಯ ಐತಿಹಾಸಿಕ ಹಿನ್ನೆಲೆ: ದೇಶಮುಖರೆಂಬ ಪಾಳೇಗಾರರು ವಡಗಾಂವ ಗ್ರಾಮವನ್ನ ಆಳ್ವಿಕೆ ನಡೆಸುತ್ತಿದ್ದರು. ಶತ್ರುಗಳನ್ನು ಸೋಲಿಸಿದ ಸವಿ ನೆನಪಿಗಾಗಿ ಬೃಹತ್ ಗಾತ್ರದ ರಣಗಂಬವನ್ನ ಸ್ಥಾಪಿಸಲಾಗಿದೆ. ಈ ಸಂಪ್ರದಾಯವು ಇಂದಿಗೂ ಕೂಡ ಮುಂದುವರೆದುಕೊಂಡು ಬಂದಿದ್ದು, ರಣಗಂಬವನ್ನ ಎತ್ತಿ ನಿಲ್ಲಿಸದಿದ್ದರೆ ಇಡೀ ಊರೇ ಶಾಪಗ್ರಸ್ತ ವಾಗಲಿದೆ ಎನ್ನುವುದು ಊರಿನವರ ಅಭಿಪ್ರಾಯವಾಗಿದೆ. ಅಂದಿನಿಂದ ಇಲ್ಲಿಯವರೆಗೂ ರಣಗಂಬ ಜಾತ್ರೆ ಆಚರಣೆ ಮಾಡಲಾಗುತ್ತಿದೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *